ಕೆ ಎ ಸುರೇಶ್ ಅವರ ನೂತನ ಚಿತ್ರ
Posted date: 11 Mon, Jul 2016 – 10:43:13 AM

ಕನ್ನಡ ಚಿತ್ರ ರಂಗದಲ್ಲಿ ಯಶಸ್ವಿ ಸಿನಿಮಾಗಳಾದ ‘ಎರಡನೇ ಮದುವೆ, ಗೋವಿಂದಾಯನಾಮಹ, ಶ್ರಾವಣಿ ಸುಬ್ರಮಣಿ ಹಾಗೂ ಶಿವಲಿಂಗ’ ನಿರ್ಮಾಪಕ ಕೆ ಎ ಸುರೇಶ್ ಅವರ ಮತ್ತೊಂದು ಚಿತ್ರ "ಫ‌ಸ್ಟ್‌ ರ್‍ಯಾಂಕ್‌ ರಾಜು' ನಟ ಗುರುನಂದನ್ ಹಾಗೂ ನಿರ್ದೇಶಕ ನರೇಶ್ ಕುಮಾರ್ ಅವರ ಜೋಡಿಯ ಚಿತ್ರ ಸೆಟ್ಟೇರಿದೆ. ಮುಂದಿನ ದಿನಗಳಲ್ಲಿ ಡಾ ಶಿವರಾಜಕುಮಾರ್ ಅವರ ‘ಖದರ್’ ಸಹ ನಿರ್ಮಾಪಕ ಕೆ ಎ ಸುರೇಶ್ ನಿರ್ಮಾಣ ಮಾಡಲಿದ್ದಾರೆ.

ನಿರ್ಮಾಪಕ ಸುರೇಶ್ ಅವರ ಐದನೇ ಚಿತ್ರದ ಶೀರ್ಷಿಕೆ ಇನ್ನೂ ಅಂತಿಮವಾಗಿಲ್ಲ. ನಾಯಕ ಗುರುನಂದನ್ ಜೊತೆ ‘ರಂಗಿ ತರಂಗ, ಕಲ್ಪನ 2 ಹಾಗೂ ರಾಜ ರಥ’ ಚಿತ್ರಗಳ ನಾಯಕಿ ಆವಂತಿಕ ಶೆಟ್ಟಿ ನಾಯಕಿ ಆಗಿ ಆಯ್ಕೆ ಆಗಿದ್ದಾರೆ.

"ಫ‌ಸ್ಟ್‌ ರ್‍ಯಾಂಕ್‌ ರಾಜು' ಚಿತ್ರದಲ್ಲಿ ಸುಮಧುರ ಗೀತೆಗಳನ್ನು ನೀಡಿದ ಕಿರಣ್ ರವೀಂದ್ರನಾಥ್ ಈ ಚಿತ್ರಕ್ಕೂ ಸಂಗೀತ ಒದಗಿಸುತ್ತಾ ಇದ್ದಾರೆ. ಶೇಖರ್ ಚಂದ್ರ ಅವರ ಛಾಯಾಗ್ರಹಣ ಮಾಡುತ್ತಿದ್ದಾರೆ.

ನಿರ್ದೇಶಕ ನರೇಶ್ ಕುಮಾರ್ ಅವರೇ ಚಿತ್ರದ ಕಥೆ, ಚಿತ್ರಕಥೆ ಜವಾಬ್ದಾರಿ ನಿರ್ವಹಿಸಿದ್ದಾರೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed